ಹಣ

ಹಣ
ವಸ್ತು ವಿನಿಮಯದ ಮಾಧ್ಯಮ-
ಆಗಿದೆ ಜೀವನದ ಗುರಿ.
ಗಳಿಸಲುಂಟು ನೂರಾರು ದಾರಿ
ಭಿಕ್ಷೆಯಿಂದ ಹಾದರದವರೆಗೆ
ಲಂಚ, ಕಳವು, ಜೂಜೂ ಸೇರಿ,
ದುಡಿಮೆಯದಕೆ ತುಚ್ಛ ದಾರಿ!
ಬಾಳಲೆಂದು ಗಳಿಸ ಹೋಗಿ,
ಗಳಿಸಲೆಂದೇ ಬಾಳುತಿಹರು.
ಸೇರಿದವರಿಗೇ ಹೆಚ್ಚೆಚ್ಚು ಸೇರುವುದು
ಬಡವನ ಹತ್ತಿರವೂ ಸುಳಿಯದು.
ಕೆಲವರ ತಿಜೋರಿಯಲ್ಲಿ ಕೊಳೆತು
ಕಪ್ಪು ಹಣವೆನಿಸಿಕೊಳ್ಳುವುದು
ಮತ್ತೆ ಕೆಲವರಿಗದು ಗಗನ ಕುಸುಮ.

ಹಿಪ್ ಪಾಕೆಟಿನಲ್ಲಿ ಬೆರಳು ತೂರಿಸಿ
ಕೆದಕಿದಾಗ, ಕೈಗೆ ತಗಲದ ಹಣ,
ಊಟಕ್ಕಿಲ್ಲದ ಉಪ್ಪಿನಕಾಯಿ.
ಹಣವಿದ್ದರುಂಟು ಸರ್ವ ಸುಖ.
‘ಸರ್ವೇ ಗುಣಾಃ ಕಾಂಚನ ಮಾಶ್ರಯಂತಿ’
ಹಣರಹಿತ ಬಾಳು ಸಾದ್ಯವಿದ್ದಿದ್ದರೆ?
ದೊರಕೀತು ಮನಕೆ ನೆಮ್ಮದಿ,
ಧುಮುಕದೆ ಹರಿದೀತು ಬಾಳ ನದಿ.
*****
೧೭-೦೫-೧೯೭೫

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನನ್ನೂರಿನ ಸಂವೇದನೆ
Next post ಮಾಯದ ಮುತ್ತು

ಸಣ್ಣ ಕತೆ

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

cheap jordans|wholesale air max|wholesale jordans|wholesale jewelry|wholesale jerseys